ಅರ್ಧರ್ಧ ಬರೆದ ಸಾಲುಗಳು...
ಅರ್ಥ......................????
ನೆನಪು -
ಮನದಲ್ಲಿ ನಿಂತ ನೆನಪುಗಳು ನಾಳೆಗೆ ಪಾಠವಾದರೆ ಬದುಕು ನಗುತ್ತೆ - ಇಲ್ಲದೇ ಹೋದಲ್ಲಿ ನಮ್ಮನ್ನು ನಿನ್ನೆಯಿಂದಾಚೆ ನಡೆಯಗೊಡದೇ, ನಾಳೆಗಳನೂ ನಿನ್ನೆಗಳಲೇ ಬೆರೆಸಿ, ಕೊಳೆಸಿ, ನಿಜವಾದ ಹೊಸ ನಾಳೆಗಳೇ ಇಲ್ಲದಂತಾಗಿಸಿಬಿಡುತ್ತವೆ - ಬದುಕು ನಿಂತಲ್ಲೆ ನಿಂತು ಪಾಚಿಗಟ್ಟಿದ ನಿರುಪಯುಕ್ತ ನೀರಾಗುತ್ತೆ...
ಯಾವ ದಾರಿ ನಾನೇ ನನ್ನ ಕೀಳಾಗಿ ಕಾಣುವಷ್ಟು ಅವಮಾನಿಸಿತೋ, ಯಾವ ದಾರಿ ನನ್ನ ಆತ್ಮಾಭಿಮಾನವನ್ನೇ ಅಲುಗಾಡಿಸಿತೋ ಅದೇ ದಾರೀಲಿ ಮತ್ತೆ ನಡೆಯುವಂತೆ ಆಸೆ ಹುಟ್ಟಿಸೋ ಕೆಲ ನೆನಪುಗಳೆಡೆಗೆ; ಅವೆಷ್ಟೇ ಸಿಹಿ ಅನ್ನಿಸಿದರೂ ಅಂಥ ನೆನಪುಗಳ ಮತ್ತೆ ಮತ್ತೆ ಎದುರು ತಂದು ನಿಲ್ಲಿಸಿ ತನ್ನಾಸೆಯ ಶಕ್ತಿ ಹೆಚ್ಚಿಸಿಕೊಳ್ಳ ಬಯಸೋ ನನ್ನದೇ ಮನದ ದೌರ್ಬಲ್ಯದೆಡೆಗೆ ನನ್ನ ಧಿಕ್ಕಾರವಿದೆ...
ಪ್ರಜ್ಞೆ ತಾನು ಎತ್ತರದ ಗೆಲುವಿನ ಕನಸು ಕಂಡರೆ ಈ ಮನಸೋ ಬದುಕಿನೊಳಮನೆಯ ಗಬ್ಬೆಬ್ಬಿಸಿದ ಅದೇ ಹಳೆಯ ಆಸೆಗಳ (ನೆನಪು) ಸುತ್ತ ಗಿರಕಿಹೊಡೆಯುತ್ತಿರುತ್ತೆ...
ನಾಚಿಕೆಯಿಲ್ಲದ ಹಂದಿಯಂಥ ಮನಸು - ಕೊಳಚೆಯೆಂದರೆ ಅದೇನು ಪ್ರೀತಿಯೋ...
ದುರುಳ ಜನಗಳ ಕಲ್ಲೇಟಿನ ನೋವನೂ ನಗುವಿಂದಲೇ ಅರಗಿಸಿಕೊಂಡು, ಆ ನಗುವಿಂದಲೇ ಕಲ್ಲೆಸೆದ ಜನರನು ಅಣಕಿಸಬಲ್ಲ ಮರುಳನ ಮನದ ನಗುವೂ ಯಾಕೋ ಶ್ರೇಷ್ಠವೇ ಅಂತೆನಿಸುತ್ತೆ... ನಿದ್ದೆ ಹೊರಳಲ್ಲಿನ ಮಗುವ ನಗುವಂಥ ನಗುವಲ್ಲಿ ಎಲ್ಲವನೂ ಕೊನೆಗೆ ತನ್ನನೇ ತಾನೂ ಮರೆತವನ ನಗುವನ್ನು ಹೀಗಳೆಯಲಿ ಹೇಗೆ... ಅಹಂನ ಕೋಟೆಯೊಳಗಿನ ಒಣ ಗಾಂಭೀರ್ಯದ ಸಭ್ಯತೆಗಿಂತ - ಬಯಲ ತುಂಬುವ ಶುದ್ಧ ಮನದ ಸ್ವಚ್ಛ ನಗು ಹೆಚ್ಚು ಹಿತಕರ ಅಲ್ಲವಾ... ನಗು ದಕ್ಕಿದಾಗ ನಕ್ಕುಬಿಡಿ ಮನಸಾರೆ - ಕಣ್ಣಲಿ ಹೊಸ ಬೆಳಕು ಮೂಡಲಿ... ಜನ ಹುಚ್ಚು ಅಂದರೆ ಅನ್ನಲಿ... ಹಂಚಬಹುದಾದ ನಗುವಾದರೆ ಒಂಚೂರು ಹಂಚಿಬಿಡಿ ಅವರೂ ಹುಚ್ಚರಾಗಲಿ... ನಗುವೆಂಬುದು ಎಲ್ಲರ ಆತ್ಮದ ದೀಪವಾಗಲಿ... :)
ಹಾಳಾದ್ದು ಈ ಸಾವಿಗೆ ಸ್ವಲ್ಪವೂ ಕರುಣೆಯೆಂಬುದಿಲ್ಲ...
ಅಲ್ಲೇಲ್ಲೋ ಅಕಾಲದಲ್ಲೂ ಬಂದು ಕಂಗೆಡಿಸುವುದು - ಇನ್ನೆಲ್ಲೋ ಅದಕೆಂದೇ ಕಾಯುತಿರುವವರೆಡೆಗೆ ತಿರುಗಿಯೂ ನೋಡದೇ ಕಾಡುವುದು...
ಬದುಕೆಂಬ ಹಾಡಿನ ಸ್ವರ, ಲಯ, ತಾಳಗಳ ಹದ ತಪ್ಪಿಸಿ ವಿನೋದ ನೋಡುವ ಸಾವೆಂಬ ಸಾವಿನ ಎಲ್ಲ ನಡೆಗಳೂ ವಿಪರೀತಗಳೇ...
ಮಳೆಗಾಲದ ಹಬ್ಬಗಳ ಒಂದು ನೆನಪು -
ಮುಂಬೆಳಗಲ್ಲಿ ಹನಿವ ಸೋನೆಯ ಲಾಸ್ಯ...
ಅಂಗಳದ ನೀರಲ್ಲಿ ರಂಗೋಲಿ ಹುಡಿಯ ನಾಟ್ಯ...
ಒಳಮನೇಲಿ ಅಮ್ಮನ ಬಳೆಗಳ ತಾರಕ ಸಂಗೀತ...
ನನ್ನ ನಾಲಿಗೆಗೆ ಕಜ್ಜಾಯದ ಆಸೆಯ ತುರಿಕೆ...
ಸಾವಿನ ಮನೆಯಂಗಳದಲ್ಲೂ ಎಂದಿನಂತೆ ಮತ್ತು ಎಲ್ಲಿನಂತೆ ಸೂರ್ಯ ಅದೇ ನಗು ನಗುತ್ತಾನೆ...
ಕಣ್ಣೀರಲ್ಲೂ ಕಾಮನಬಿಲ್ಲನು ಬಿಂಬಿಸಬಲ್ಲನಾತ - ಬೆಳಕಿನಾಗರ...
ಎತ್ತರದಲ್ಲಿರುವವರಿಗೆ (ಪ್ರಕೃತಿಗೆ) ಸೂತಕಗಳ ಹಂಗಿಲ್ಲವೆನ್ನಿಸುತ್ತೆ...!!!
ಅಬ್ಬರಿಸಿ ನಗುತ್ತೇನೆ -
ಅಳಬಾರದೆಂಬ ಅಹಂಕಾರ ಮತ್ತು ಅಳು ಕೂಡ ಬಾರದಷ್ಟು ಅಸಹಾಯಕತೆ ಕಾಡುವಾಗಲೆಲ್ಲ...
ಹೃದಯದ ಬಿಕ್ಕಳಿಕೆಗಳ ಹಕ್ಕುಗಳನ್ನೆಲ್ಲ ಇರುಳಿಗೆ ಮಾರಿದ್ದೇನೆ...
ಹೃದಯ ಮತ್ತು ಕಣ್ಣುಗಳ ಅನುಸಂಧಾನದಲ್ಲಿ ಭಾವಗಳು ಬೆತ್ತಲಾಗಲು ಕೂಡ ಇರುಳೇ ಹಿತವಂತೆ...
ಹಗಲಿಗೆಂದೂ ಕಣ್ಣ ಹನಿ ಕಾಣಬಾರದು - ಹಗಲೇನಿದ್ದರೂ ನಗುವ ಮಾರುವ ಸಂತೆ...
ಅರ್ಥ......................????
ನೆನಪು -
ಮನದಲ್ಲಿ ನಿಂತ ನೆನಪುಗಳು ನಾಳೆಗೆ ಪಾಠವಾದರೆ ಬದುಕು ನಗುತ್ತೆ - ಇಲ್ಲದೇ ಹೋದಲ್ಲಿ ನಮ್ಮನ್ನು ನಿನ್ನೆಯಿಂದಾಚೆ ನಡೆಯಗೊಡದೇ, ನಾಳೆಗಳನೂ ನಿನ್ನೆಗಳಲೇ ಬೆರೆಸಿ, ಕೊಳೆಸಿ, ನಿಜವಾದ ಹೊಸ ನಾಳೆಗಳೇ ಇಲ್ಲದಂತಾಗಿಸಿಬಿಡುತ್ತವೆ - ಬದುಕು ನಿಂತಲ್ಲೆ ನಿಂತು ಪಾಚಿಗಟ್ಟಿದ ನಿರುಪಯುಕ್ತ ನೀರಾಗುತ್ತೆ...
ಯಾವ ದಾರಿ ನಾನೇ ನನ್ನ ಕೀಳಾಗಿ ಕಾಣುವಷ್ಟು ಅವಮಾನಿಸಿತೋ, ಯಾವ ದಾರಿ ನನ್ನ ಆತ್ಮಾಭಿಮಾನವನ್ನೇ ಅಲುಗಾಡಿಸಿತೋ ಅದೇ ದಾರೀಲಿ ಮತ್ತೆ ನಡೆಯುವಂತೆ ಆಸೆ ಹುಟ್ಟಿಸೋ ಕೆಲ ನೆನಪುಗಳೆಡೆಗೆ; ಅವೆಷ್ಟೇ ಸಿಹಿ ಅನ್ನಿಸಿದರೂ ಅಂಥ ನೆನಪುಗಳ ಮತ್ತೆ ಮತ್ತೆ ಎದುರು ತಂದು ನಿಲ್ಲಿಸಿ ತನ್ನಾಸೆಯ ಶಕ್ತಿ ಹೆಚ್ಚಿಸಿಕೊಳ್ಳ ಬಯಸೋ ನನ್ನದೇ ಮನದ ದೌರ್ಬಲ್ಯದೆಡೆಗೆ ನನ್ನ ಧಿಕ್ಕಾರವಿದೆ...
ಪ್ರಜ್ಞೆ ತಾನು ಎತ್ತರದ ಗೆಲುವಿನ ಕನಸು ಕಂಡರೆ ಈ ಮನಸೋ ಬದುಕಿನೊಳಮನೆಯ ಗಬ್ಬೆಬ್ಬಿಸಿದ ಅದೇ ಹಳೆಯ ಆಸೆಗಳ (ನೆನಪು) ಸುತ್ತ ಗಿರಕಿಹೊಡೆಯುತ್ತಿರುತ್ತೆ...
ನಾಚಿಕೆಯಿಲ್ಲದ ಹಂದಿಯಂಥ ಮನಸು - ಕೊಳಚೆಯೆಂದರೆ ಅದೇನು ಪ್ರೀತಿಯೋ...
ರೂಪದರ್ಶಿ: ಮುದ್ದು ಸೊಸೆ ‘ಅಭಿಜ್ಞಾ’ |
ಹಾಳಾದ್ದು ಈ ಸಾವಿಗೆ ಸ್ವಲ್ಪವೂ ಕರುಣೆಯೆಂಬುದಿಲ್ಲ...
ಅಲ್ಲೇಲ್ಲೋ ಅಕಾಲದಲ್ಲೂ ಬಂದು ಕಂಗೆಡಿಸುವುದು - ಇನ್ನೆಲ್ಲೋ ಅದಕೆಂದೇ ಕಾಯುತಿರುವವರೆಡೆಗೆ ತಿರುಗಿಯೂ ನೋಡದೇ ಕಾಡುವುದು...
ಬದುಕೆಂಬ ಹಾಡಿನ ಸ್ವರ, ಲಯ, ತಾಳಗಳ ಹದ ತಪ್ಪಿಸಿ ವಿನೋದ ನೋಡುವ ಸಾವೆಂಬ ಸಾವಿನ ಎಲ್ಲ ನಡೆಗಳೂ ವಿಪರೀತಗಳೇ...
ಮಳೆಗಾಲದ ಹಬ್ಬಗಳ ಒಂದು ನೆನಪು -
ಮುಂಬೆಳಗಲ್ಲಿ ಹನಿವ ಸೋನೆಯ ಲಾಸ್ಯ...
ಅಂಗಳದ ನೀರಲ್ಲಿ ರಂಗೋಲಿ ಹುಡಿಯ ನಾಟ್ಯ...
ಒಳಮನೇಲಿ ಅಮ್ಮನ ಬಳೆಗಳ ತಾರಕ ಸಂಗೀತ...
ನನ್ನ ನಾಲಿಗೆಗೆ ಕಜ್ಜಾಯದ ಆಸೆಯ ತುರಿಕೆ...
ಸಾವಿನ ಮನೆಯಂಗಳದಲ್ಲೂ ಎಂದಿನಂತೆ ಮತ್ತು ಎಲ್ಲಿನಂತೆ ಸೂರ್ಯ ಅದೇ ನಗು ನಗುತ್ತಾನೆ...
ಕಣ್ಣೀರಲ್ಲೂ ಕಾಮನಬಿಲ್ಲನು ಬಿಂಬಿಸಬಲ್ಲನಾತ - ಬೆಳಕಿನಾಗರ...
ಎತ್ತರದಲ್ಲಿರುವವರಿಗೆ (ಪ್ರಕೃತಿಗೆ) ಸೂತಕಗಳ ಹಂಗಿಲ್ಲವೆನ್ನಿಸುತ್ತೆ...!!!
ಅಬ್ಬರಿಸಿ ನಗುತ್ತೇನೆ -
ಅಳಬಾರದೆಂಬ ಅಹಂಕಾರ ಮತ್ತು ಅಳು ಕೂಡ ಬಾರದಷ್ಟು ಅಸಹಾಯಕತೆ ಕಾಡುವಾಗಲೆಲ್ಲ...
ಹೃದಯದ ಬಿಕ್ಕಳಿಕೆಗಳ ಹಕ್ಕುಗಳನ್ನೆಲ್ಲ ಇರುಳಿಗೆ ಮಾರಿದ್ದೇನೆ...
ಹೃದಯ ಮತ್ತು ಕಣ್ಣುಗಳ ಅನುಸಂಧಾನದಲ್ಲಿ ಭಾವಗಳು ಬೆತ್ತಲಾಗಲು ಕೂಡ ಇರುಳೇ ಹಿತವಂತೆ...
ಹಗಲಿಗೆಂದೂ ಕಣ್ಣ ಹನಿ ಕಾಣಬಾರದು - ಹಗಲೇನಿದ್ದರೂ ನಗುವ ಮಾರುವ ಸಂತೆ...
*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)
’ಮಳೆಗಾಲದ ಹಬ್ಬಗಳ ಒಂದು ನೆನಪು -
ReplyDeleteಮುಂಬೆಳಗಲ್ಲಿ ಹನಿವ ಸೋನೆಯ ಲಾಸ್ಯ...
ಅಂಗಳದ ನೀರಲ್ಲಿ ರಂಗೋಲಿ ಹುಡಿಯ ನಾಟ್ಯ...
ಒಳಮನೇಲಿ ಅಮ್ಮನ ಬಳೆಗಳ ತಾರಕ ಸಂಗೀತ...
ನನ್ನ ನಾಲಿಗೆಗೆ ಕಜ್ಜಾಯದ ಆಸೆಯ ತುರಿಕೆ...’
ಈ ಸಾಲುಗಳನ್ನೇ ತುಸು polish ಮಾಡಿ ನಮಗಾಗಿ ಒಂದು ಕವನವಾಗಿಸಿಕೊಡಿ.
ಶ್ರೀವತ್ಸ ಕಂಚೀಮನೆ, ಫಿಲಾಸಪಿಯಲ್ಲಿ ನಾನು ದಡ್ಡ!
ReplyDelete