Monday, April 10, 2017

ಗೊಂಚಲು - ಎರಡ್ನೂರಾ ಹದ್ನಾರು.....

ಹುಚ್ಚುಚ್ಚು ಸಂಗತಿಗಳು.....

ಮನಸು:
ಇದ್ದಬದ್ದ ಭಾವಗಳಿಗೆಲ್ಲ ಹದ್ದಿಲ್ಲದ ಬೇಶರತ್ ಒಡನಾಟದ
ಸೂರು ಕೊಟ್ಟು ಸಾಕುವ ಸೂಳೆಗೇರಿ -

ಬದುಕು:
ಎಲ್ಲೆಲ್ಲೋ ಅಂಡಲೆದಲೆದು ಇನ್ನೆಲ್ಲೋ ಬಂದು ನಿಲ್ಲುವ
ಹಾದರದ ಹಾದಿ -

ಸಾವು:
ಅಂತಿಮವಾಗಿ ಎಲ್ಲವನ್ನೂ ಹಸಿ ಹಸಿ ತಿಂದು ತೇಗುವ
ಶುದ್ಧ ಮಾಂಸಾಹಾರಿ...
!!!!!

ಬದುಕು ಕೊಡದ ಅವಕಾಶಾನ ಭಾವ ಕೊಡತ್ತೆ...
ಕಳೆದೋಯ್ತು ಅನ್ಕೊಳೋಕಿಂತ ರೂಪಾಂತರವಾಯ್ತು ಅಥವಾ ಮುಂದೆಲ್ಲೋ ಮತ್ತೆ ಸಿಗತ್ತೆ ಅನ್ಕೊಳ್ಳೋದು ಸಾವಧಾನದ ಶಕ್ತಿ ತುಂಬತ್ತೆ...
ಅಂತೆಯೇ,
ಮಗುತನದ ಮುಗ್ಧತೆ, ಸನ್ಯಾಸಿಯ ಪ್ರಜ್ಞೆಯ ಹೊರತಾಗಿ ಲೌಕಿಕಕ್ಕೆ ಬಂದರೆ, ಇದ್ದದ್ದನ್ನು ಇದ್ದಂತೆ ಕಾಣುವ ತಿಳುವಳಿಕೆ ಒಂಥರಾ ನಾವೇ ನಮ್ಮ ಗಂಟಲಿಗೆ ಹೊಯ್ದುಕೊಂಡ ಬಿಸಿ ತುಪ್ಪದಂತೆನಿಸುತ್ತೆ...
ಮೌಢ್ಯದ ಮೊಮ್ಮಕ್ಕಳಂತ ಅಮಾಯಕತೆ, ಮುಗ್ಧತೆಗಳು ಮನದ ಸುಖದ ರೂವಾರಿಗಳಂತೆ ಕಾಣುತ್ತವೆ...
#ಮತ್ತೇನಿಲ್ಲ_ಪ್ರಜ್ಞೆಯ_ಗೆಲುವಲ್ಲಿ_ಮನಸಿಗೆ_ಒಂಟಿಯಾಗುವ_ಭಯ...
!!!!!

ನಗೆಯ ಮೂಲವ ಬಗೆಯ ಬೇಡ - ಕರುಳ ಹುಣ್ಣು ಬಿಚ್ಚಿಕೊಂಡೀತು...
#ಬೆಳ್ದಿಂಗಳು_ಮತ್ತು_ಚಂದಿರನ_ಕಲೆ...
!!!!!

ನದಿಯ ಹಾದಿ - ಕಡಲ ದಂಡೆ - ಬೊಗಸೆ ತುಂಬಿದ ಚಂದಿರ - ಮಳೆಯ ಮೌನ - ಕಾಡ ಧ್ಯಾನ - ಕಣ್ಣ ತುಂಬಾ ಅಂಬರ - ಕನಸ ಜಾಡು - ನಗೆಯ ಹಸಿವು - ಹೆಜ್ಜೆ ಗುರುತಿನ ಇಂಚರ - ಮಾತು ಮಾತಲಿ ಮಾತು ಮಥಿಸಿ ಆತುಕೊಂಡ ಮೌನಕೆ - ನೆರಳ ಮರೆತು ಬೆಸೆದ ಬೆರಳ ಕೊಡವಿ ನಡೆವ ಬಂಧಕೆ...
ತುಂಬಿಕೊಂಡಷ್ಟು ಭಾವ - ಬಳಸಿಕೊಂಡಷ್ಟು ಬಂಧ...
#ಬದುಕ_ಬೆರಣಿ
!!!!!

ಮಡಿವಂತರ ದೇಹಶುದ್ಧಿಯೂ
ಸೂಳೆಯ ಭಾವಶುದ್ಧಿಯೂ
ಪ್ರೇಮಮಯೀ ಭಗವಂತನೂ
#ಧಾರ್ಮಿಕತೆ_ಧರ್ಮ_ಆಧ್ಯಾತ್ಮ

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

1 comment:

  1. ಸಾವು:
    ಅಂತಿಮವಾಗಿ ಎಲ್ಲವನ್ನೂ ಹಸಿ ಹಸಿ ತಿಂದು ತೇಗುವ
    ಶುದ್ಧ ಮಾಂಸಾಹಾರಿ... ಮನಸ್ಸಿಗೆ ಹೌದಲ್ಲವೋ ಎಂಬೆನಿಸುವ ವಿಡಂಬನಾತ್ಮಕ ಸಾಲು.

    ReplyDelete