Sunday, March 13, 2011

ಗೊಂಚಲು - ಒಂಭತ್ತು...



ಆಗಸದ  ಚಂದ್ರಮ  ಭುವಿಯ  ಮುತ್ತಿಕ್ಕಲು  ಬಾಗುವನಂತೆ...


ಹಸಿದ  ಧರಣಿ  ಬಾಯ್ಬಿರಿವುದಂತೆ...


ಆಸೆಯ  ಶರಧಿ  ಉಕ್ಕಿ  ತನ್ನ  ಮಿತಿಯ  ಮೀರುವುದಂತೆ...


ಸಹಜ  ಸಂದರ್ಭದಲ್ಲಿ  ರತಿ  ರಮ್ಯವಾದ  ಪ್ರಕೃತಿಯೇ -
ಮುನಿದಾಗ,


ಅಟ್ಟಹಾಸದಿ  ಜವರಾಯ  ತನ್ನ  ರಾಜ್ಯ  ವಿಸ್ತರಿಸುವನಂತೆ...


ಆಗ -
ಊರು - ಕೇರಿಗಳೆಲ್ಲ  ಬರೀ  ಸ್ಮಶಾನದಂತೆ...









































ಮುನಿದ  ಪ್ರಕೃತಿ  ಶಾಂತವಾಗಲಿ.


ಜಪಾನಿನ  ಆ  ನೆಲದಲ್ಲಿ  ಚೈತನ್ಯ  ಮತ್ತೆ  ಚಿಗುರಲಿ.


ಅಳುವ  ಕಡಲಲಿ  ಮತ್ತೆ  ತೇಲಿ  ಬರಲಿ
ನಗೆಯ  ಹಾಯಿ  ದೋಣಿ...

1 comment:

  1. ಹೂಂ... ನಂದೂ ಅದೇ ಆಶಯ.....
    ಅಳುವ ಕಡಲಲಿ ಮತ್ತೆ ತೇಲಿ ಬರಲಿ
    ನಗೆಯ ಹಾಯಿ ದೋಣಿ...

    ReplyDelete